Appam, Appam - Kannada

ಜುಲೈ 28 – ದೀಪವನ್ನು ಕೊಳಗದೊಳಗೆ ಇಡಬೇಡಿರಿ!

“ದೀಪವನ್ನು ಹತ್ತಿಸಿ ಕೊಳಗದೊಳಗೆ ಇಡುವದಿಲ್ಲ; ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ. ಆಗ ಅದು ಮನೆಯಲ್ಲಿರುವವರೆಲ್ಲರಿಗೆ ಬೆಳಕುಕೊಡುವದು.” (ಮತ್ತಾ 5:15)

ನೀವು ರಕ್ಷಣೆ ಹೊಂದಿದಾಗ, ಕರ್ತನು ಆ ರಕ್ಷಣೆಯ ಜ್ವಾಲೆಯನ್ನು ನಿಮ್ಮ ಹೃದಯದಲ್ಲಿ ಹಚ್ಚುತ್ತಾನೆ. ಆದರೆ ಆತನು ನಿಮಗೆ ನೀಡಿರುವ ರಕ್ಷಣೆ ಮತ್ತು ಕೃಪೆಯನ್ನು ಅಡಗಿಸಿಡಬಾರದು ಅಥವಾ ನಿಮಗಾಗಿಯೇ ಇಟ್ಟುಕೊಳ್ಳಬಾರದು. ಈ ವಾಕ್ಯಭಾಗದಲ್ಲಿ, ದೀಪವನ್ನು ಒಂದು ಕೊಳಗದೊಳಗೆ ಮುಚ್ಚಿಟ್ಟಿರುವುದನ್ನು ನಾವು ಕಾಣುತ್ತೇವೆ.

ಇಲ್ಲಿ ಕೊಳ ಎಂಬುದು ವ್ಯಾಪಾರ ಮತ್ತು ಲೌಕಿಕ ಉದ್ಯೋಗವನ್ನು ಪ್ರತಿನಿಧಿಸುತ್ತದೆ. ಇಂದು ಅನೇಕರು ಹಣ ಸಂಪಾದಿಸುವ ಆಸೆಯಲ್ಲಿ ಎಷ್ಟು ಮುಳುಗಿದ್ದಾರೆಂದರೆ, ಅವರು ಹಗಲಿರುಳು ವ್ಯಾಪಾರ ಮತ್ತು ಕೆಲಸದಲ್ಲೇ ಕಳೆಯುತ್ತಾರೆ. ಅವರಿಗೆ ದೇವರ ವಾಕ್ಯವನ್ನು ಓದಲು, ಪ್ರಾರ್ಥಿಸಲು ಅಥವಾ ಆರಾಧಿಸಲು ಸಮಯವೇ ಇರುವುದಿಲ್ಲ. ಈ ಲೌಕಿಕ ಚಿಂತೆಗಳೆಂಬ ಕೊಳಗದೊಳಗೆ ದೀಪವನ್ನು ಮುಚ್ಚಿ, ಕ್ರಮೇಣ ಅದರ ಜ್ವಾಲೆಯು ಆರಿಹೋಗುವಂತೆ ಮಾಡುತ್ತದೆ.

ಎರಡನೆಯದಾಗಿ, ಕೊಳಗವನ್ನು ಅಳತೆ ಮಾಡಲು ಬಳಸಲಾಗುತ್ತದೆ. ಧಾನ್ಯಗಳನ್ನು ಮತ್ತು ಇತರ ಲೌಕಿಕ ವಸ್ತುಗಳನ್ನು ಅಳತೆ ಮಾಡುವುದು ಸರಿಯೇ, ಆದರೆ ನಾವು ದೇವರ ಸೇವಕರನ್ನು ಮತ್ತು ಸಹವಿಶ್ವಾಸಿಗಳನ್ನು ಅಳೆಯಲು ಮತ್ತು ಅವರಲ್ಲಿ ತಪ್ಪುಗಳನ್ನು ಹುಡುಕಲು ಪ್ರಾರಂಭಿಸಿದಾಗ, ನಮ್ಮೊಳಗಿನ ಬೆಳಕು ಮಂದವಾಗಲು ಆರಂಭಿಸುತ್ತದೆ. ಕರ್ತನು ಹೇಳುತ್ತಾನೆ: “ ನಿನ್ನ ಕಣ್ಣಿನೊಳಗಿಂದ ರವೆಯನ್ನು ತೆಗೆಯುತ್ತೇನೆ ಬಾ ಎಂದು ಹೇಳುವದು ಹೇಗೆ? ನಿನ್ನ ಕಣ್ಣಿನಲ್ಲಿ ತೊಲೆಯಿದೆಯಲ್ಲಾ” (ಮತ್ತಾ 7:4)

ಇಂದು ಅನೇಕ ವಿಶ್ವಾಸಿಗಳು ತಮ್ಮನ್ನು ತಾವು ಪರೀಕ್ಷಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಇತರರನ್ನು ಪರೀಕ್ಷಿಸುವುದರಲ್ಲೇ ಸಮಯ ಕಳೆಯುತ್ತಾರೆ. ಅವರು ಇತರರನ್ನು ಟೀಕಿಸುತ್ತಾರೆ, ದೂಷಿಸುತ್ತಾರೆ ಮತ್ತು ಬೇಜವಾಬ್ದಾರಿಯಿಂದ ಮಾತನಾಡುತ್ತಾರೆ; ಹೀಗೆ ಮಾಡುವುದರಿಂದ ದೇವರು ತಮಗೆ ನೀಡಿದ ಕೃಪೆಯನ್ನು ಕಳೆದುಕೊಳ್ಳುತ್ತಾರೆ. ಯೇಸು ಹೀಗೆ ಎಚ್ಚರಿಸಿದ್ದಾನೆ: “ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು.” (ಮಾರ್ಕ 4:24)

ತಪ್ಪು ಹುಡುಕುವ ಅಭ್ಯಾಸವನ್ನು ಬಿಟ್ಟುಬಿಡಿರಿ. ಇತರರ ಮೇಲೆ ಆರೋಪ ಮಾಡುವುದನ್ನು ನಿಲ್ಲಿಸಿರಿ. ನಿಮ್ಮ ಮಾತುಗಳನ್ನು ಎಂದಿಗೂ ಆಯುಧವಾಗಿ ಬಳಸಬೇಡಿ. ಸತ್ಯವೇದವು ಹೇಳುತ್ತದೆ: “ನೀನು ಮಾತು ಕೊಟ್ಟು ಪಾಶಕ್ಕೆ ಸಿಕ್ಕಿದ್ದೀ, ನಿನ್ನ ವಾಗ್ದಾನವು ನಿನ್ನನ್ನು ಹಿಡಿದಿದೆ.” (ಜ್ಞಾನೋಕ್ತಿ 6:2)

ಅಪೊಸ್ತಲನಾದ ಪೌಲನು ಹೀಗೆ ಬರೆದಿದ್ದಾನೆ: “ನಾವಾದರೋ ಮೇರೆದಪ್ಪಿ ಹೊಗಳಿಕೊಳ್ಳದೇ ದೇವರು ನಮಗೆ ನೇಮಿಸಿದಂಥ ಮೇರೆಯೊಳಗಿದ್ದು ನಿಮ್ಮ ಪರ್ಯಂತರಕ್ಕೂ ಬಂದಿದ್ದೇವೆ.” (2 ಕೊರಿಂಥ 10:13)

ದೀಪವನ್ನು ಕೊಳಗದೊಳಗೆ ಇಡಬೇಡಿರಿ; ಅದನ್ನು ದೀಪಸ್ತಂಭದ ಮೇಲೆ ಇಡಿರಿ. ದೀಪಸ್ತಂಭವು ಕ್ರಿಸ್ತನಿಗೆ ಸಂಕೇತವಾಗಿದೆ. ನಿಮ್ಮ ಜೀವನವು ಆತನಲ್ಲಿ ಸ್ಥಾಪಿತವಾದಾಗ, ನಿಮ್ಮ ಇಡೀ ಮನೆ ಬೆಳಕಿನಿಂದ ತುಂಬುವುದು.

ಇಲ್ಲಿ “ಮನೆ” ಎಂಬುದು ಮೊದಲನೆಯದಾಗಿ ನಿಮ್ಮ ಸ್ವಂತ ಹೃದಯವನ್ನು, ನಂತರ ನಿಮ್ಮ ಕುಟುಂಬವನ್ನು ಮತ್ತು ನಿಮ್ಮ ಸಭೆಯನ್ನು ಸೂಚಿಸುತ್ತದೆ. ನಿಮ್ಮೊಳಗೆ ಉರಿಯುವ ಬೆಂಕಿಯು ದೇವರು ನಿಮ್ಮನ್ನು ಇರಿಸುವ ಪ್ರತಿಯೊಂದು ಸ್ಥಳದಲ್ಲೂ ಆತ್ಮಿಕ ಜಾಗೃತಿ ಮತ್ತು ಬೆಳಕನ್ನು ತರಬಲ್ಲದು.

ಪ್ರಿಯ ದೇವರ ಮಕ್ಕಳೇ, ನೀವು ಅಗ್ನಿಜ್ವಾಲೆಯಾಗಲು ಕರೆಯಲ್ಪಟ್ಟಿರುವುದರಿಂದ, ಪ್ರಕಾಶಮಾನವಾಗಿ ಉರಿಯಿರಿ ಮತ್ತು ನಿಮ್ಮ ಬೆಳಕನ್ನು ಎಲ್ಲೆಡೆ ಬೆಳಗಿಸಿರಿ.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ:

“ನೀವು ಲೋಕಕ್ಕೆ ಬೆಳಕಾಗಿದ್ದೀರಿ. ಗುಡ್ಡದ ಮೇಲೆ ಕಟ್ಟಿರುವ ಊರು ಮರೆಯಾಗಿರಲಾರದು. ಮತ್ತು ದೀಪವನ್ನು ಹತ್ತಿಸಿ ಕೊಳಗದೊಳಗೆ ಇಡುತ್ತಾರಷ್ಟೆ. ಆಗ ಅದು ಮನೆಯಲ್ಲಿರುವವರೆಲ್ಲರಿಗೆ ಬೆಳಕುಕೊಡುವದು.” (ಮತ್ತಾ 5:14–15)

Leave A Comment

Your Comment
All comments are held for moderation.