ಜುಲೈ 12 – ಮತ್ತೊಂದು ಲಕ್ಷಣ!
“ಅಹಾ, ವಾಣಿಯು ಮತ್ತೆ ಕೇಳಿಸಿ – ಕೂಗು ಎನ್ನುತ್ತದೆ. ಅದಕ್ಕೆ ನಾನು ಏನು ಕೂಗಲಿ ಎಂದು ಕೇಳಲು ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ, ಅದರ ಲಾವಣ್ಯವೆಲ್ಲಾ ಅಡವಿಯ ಹೂವಿನಂತಿದೆ.” (ಯೆಶಾ 40:6).
ಪ್ರವಾದಿಯಾದ ಯೆಶಾಯನಿಗೆ ಆಕಾಶದಿಂದ ಒಂದು ಧ್ವನಿಯು ಕೇಳಿಸಿತು. ಅದು ಮಾನವಕುಲದ ಆತ್ಮಿಕ ಸ್ಥಿತಿಯನ್ನು ಮತ್ತು ಬರಲಿರುವ ನ್ಯಾಯತೀರ್ಪಿನಿಂದ ಜನರು ಹೇಗೆ ಪಾರಾಗಬಹುದು ಎಂಬುದನ್ನು ಪ್ರಕಟಿಸಿತು. ಆ ಪರಲೋಕದ ಧ್ವನಿಯು—”ಕೂಗು!” ಎಂದು ಆಜ್ಞಾಪಿಸಿತು.
ಕೂಡಲೇ ಯೆಶಾಯನು—”ನಾನು ಏನೆಂದು ಕೂಗಲಿ?” ಎಂದು ಕೇಳಿದನು. ಆಗ ಕರ್ತನು ಒಂದು ಪ್ರಮುಖ ಸತ್ಯವನ್ನು ಸಾರಲು ಬಯಸಿದನು: “ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ ಹಸಿರ, ಅದರ ಲಾವಣ್ಯವೆಲ್ಲಾ ಅಡವಿಯ ಹೂವಿನಂತಿದೆ.”
ನೋಹನ ದಿನಗಳಲ್ಲಿ ಸಂಭವಿಸಿದ್ದು ಮನುಷ್ಯಕುಮಾರನ ಬರುವಿಕೆಯ ಮುಂಚಿನ ದಿನಗಳಲ್ಲೂ ಸಂಭವಿಸಲಿದೆ. ಜನರು ಹುಲ್ಲಿನಂತಿದ್ದರು ಮತ್ತು ಅವರ ಮಹಿಮೆಯು ಕಾಡಿನ ಹೂವುಗಳಂತಿತ್ತು. ಅವರ ದುಷ್ಟತನವು ತುಂಬಿದಾಗ, ಜಲಪ್ರಳಯವು ಬಂದು ಅವರೆಲ್ಲರನ್ನೂ ಕೊಚ್ಚಿಕೊಂಡು ಹೋಯಿತು.
ಮನುಷ್ಯನು ತನ್ನನ್ನು ಎಷ್ಟೇ ಬಲಶಾಲಿ ಮತ್ತು ಪರಾಕ್ರಮಿ ಎಂದು ಭಾವಿಸಿಕೊಂಡರೂ, ದೇವರು ಅವನನ್ನು ಹುಲ್ಲಿನಂತೆ ನೋಡುತ್ತಾನೆ. ಸತ್ಯವೇದವು ಹೇಳುತ್ತದೆ: “ಸೂರ್ಯನು ಉದಯಿಸಿ ಉಷ್ಣವಾದ ಗಾಳಿ ಬೀಸಿ ಹುಲ್ಲನ್ನು ಬಾಡಿಸಲು ಆ ಹುಲ್ಲಿನ ಹೂವು ಉದುರಿ ಅದರ ರೂಪದ ಸೊಗಸು ಕೆಡುವದಷ್ಟೆ. ಹೀಗೆಯೇ ಐಶ್ಚರ್ಯವಂತನು ತನ್ನ ವ್ಯವಹಾರಗಳಲ್ಲಿಯೇ ಕುಂದಿಹೋಗುವನು.” (ಯಾಕೋ 1:11).
ಇದೇ ಪರಲೋಕದ ಸಂದೇಶವನ್ನು ನಂತರ ಅಪೊಸ್ತಲರಾದ ಪೇತ್ರ ಮತ್ತು ಯಾಕೋಬ ಇಬ್ಬರೂ ಪುನರುಚ್ಚರಿಸಿದರು: “ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ, ಅದರ ಪ್ರಭಾವವೆಲ್ಲಾ ಹುಲ್ಲಿನ ಹೂವಿನಂತದೆ. ಹುಲ್ಲು ಒಣಗಿಹೋಗುವದು, ಹೂವು ಉದುರಿ ಹೋಗುವದು; ಕರ್ತನ ಮಾತೋ ಸದಾಕಾಲವೂ ಇರುವದು.” (1 ಪೇತ್ರ 1:24–25).
ಕರ್ತನು ಪ್ರತಿಯೊಬ್ಬ ವ್ಯಕ್ತಿಯನ್ನು ಒಂದು ಕಾಲದವರೆಗೆ ತಾಳ್ಮೆಯಿಂದ ಗಮನಿಸುತ್ತಾನೆ. ಯಾರೂ ನಾಶವಾಗುವುದು ಆತನಿಗೆ ಇಷ್ಟವಿಲ್ಲ. ಅದಕ್ಕಾಗಿಯೇ ಕ್ರಿಸ್ತನು ಶಿಲುಬೆಯ ಮೇಲೆ ಮರಣವನ್ನು ಅನುಭವಿಸಿದನು, ಇದರಿಂದ ಎಲ್ಲರೂ ಪಶ್ಚಾತ್ತಾಪಕ್ಕೆ ಬರಬಹುದು. ಆದರೆ ಒಬ್ಬ ವ್ಯಕ್ತಿಯು ಪಶ್ಚಾತ್ತಾಪ ಪಡಲು ಮತ್ತು ದೇವರು ಬಯಸುವ ಪರಿಶುದ್ಧತೆಯಲ್ಲಿ ನಡೆಯಲು ನಿರಾಕರಿಸಿದರೆ, ಅವನ ಜ್ಞಾನ, ಸಂಪತ್ತು, ಪ್ರಭಾವ ಮತ್ತು ಬಲವು ಅಂತಿಮವಾಗಿ ಅವನ ಸ್ವಂತ ಆತ್ಮಕ್ಕೆ ಉರುಳಾಗಬಹುದು.
ಮೊದಲನೆಯದಾಗಿ, ಮನುಷ್ಯನು ತಾನು ಕೇವಲ ಹುಲ್ಲಿನಂತಿದ್ದಾನೆ ಎಂಬುದನ್ನು ಗುರುತಿಸಬೇಕು. ಹುಲ್ಲು ಮಾನವ ಜೀವನದ ತಾತ್ಕಾಲಿಕ ಮತ್ತು ದುರ್ಬಲ ಸ್ವಭಾವವನ್ನು ಸೂಚಿಸುತ್ತದೆ. ದಾವೀದನು ಒಬ್ಬ ಮಹಾ ರಾಜನಾಗಿದ್ದರೂ, ತನ್ನನ್ನು ತಗ್ಗಿಸಿಕೊಂಡು: “ನಾನಾದರೋ ಹುಳದಂತವನೇ ಹೊರತು ಮನುಷ್ಯನಲ್ಲ” ಎಂದು ಸಾರಿದನು (ಕೀರ್ತನೆ 22:6).
ಅದೇ ರೀತಿ, ಯಾಕೋಬನು ಜೀವನದ ಕ್ಷಣಿಕತೆಯನ್ನು ಹೀಗೆ ವಿವರಿಸಿದ್ದಾನೆ: “ನಿಮ್ಮ ಜೀವಮಾನವು ಎಂಥದು? ನೀವು ಸ್ವಲ್ಪ ಹೊತ್ತು ಕಾಣಿಸಿಕೊಂಡು ಆಮೇಲೆ ಕಾಣದೆಹೋಗುವ ಹಬೆಯಂತಿರುತ್ತೀರಿ.” (ಯಾಕೋ 4:14).
ಪ್ರೀತಿಯ ದೇವರ ಮಕ್ಕಳೇ, ಈ ಕ್ಷಣಿಕ ಜೀವನದಲ್ಲಿ ಕರ್ತನನ್ನು ಗಟ್ಟಿಯಾಗಿ ಹಿಡಿದುಕೊಳ್ಳಿರಿ. ಆತನೊಬ್ಬನೇ ಶಾಶ್ವತನಾಗಿದ್ದಾನೆ. ಆತನೊಬ್ಬನೇ ನಿತ್ಯವಾದ ಆಶೀರ್ವಾದಗಳನ್ನು ನೀಡಲು ಶಕ್ತನಾಗಿದ್ದಾನೆ. ಹುಲ್ಲಿನಂತೆ ಬಾಡಿಹೋಗುವ ಲೌಕಿಕ ಸಾಧನೆಗಳ ಮೇಲೆ ನಮ್ಮ ಭರವಸೆಯನ್ನು ಇಡದೆ, ಎಂದೆಂದಿಗೂ ಸ್ಥಿರವಾಗಿರುವ ದೇವರ ಬದಲಾಗದ ವಾಕ್ಯ ಮತ್ತು ನಂಬಿಗಸ್ತಿಕೆಯ ಮೇಲೆ ನಮ್ಮ ನಂಬಿಕೆಯನ್ನು ಇಡೋಣ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ:
“ನನ್ನ ದಿನಗಳು ಅಂಚೆಯವನಿಗಿಂತ ಶೀಘ್ರವಾಗಿತ್ತವೆ. ಯಾವ ಸುಖವನ್ನು ಕಾಣದೆ ಓಡಿ ಹೋಗುತ್ತವೆ. ” (ಯೋಬ 9:25).